== ಜನನ == ಬಾಬಾ ರಾಮ್ ದೇವ್ ಅವರ ಮೊದಲ ಹೆಸರು ರಾಮಕೃಷ್ಣ ಯಾದವ್. ಇವರು ಹರಿಯಾಣದ ಆಲಿಪುರ ಗ್ರಾಮದ ಮಹೇಂದ್ರಗರ್ ನಲ್ಲಿ ೧೯೬೫ರಲ್ಲಿ ಜನಿಸಿದರು. ತಂದೆ ಹೆಸರು ರಾಮ್ ಯಾದವ್, ತಾಯಿಯ ಹೆಸರು ಗುಲಾಬ್ ದೇವಿ. == ವೃತ್ತಿ == ಬಾಬಾ ರಾಮ್ ದೇವ್ ಅವರ ಯೋಗ ಗುರುಗಳಾಗಿ ಗಿಡಮೂಲಿಕೆ, ರಾಜಿಕೀಯ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಿದರು. ಇವರು ಭಾರತದಲ್ಲಿ ಆನೇಕ ಭಾರತೀಯರಿಗೆ ಯೋಗ ನಡೆಸುತ್ತಿದ್ದಾರೆ. ಇವರು ಪತಂಜಲಿ ಗ್ರೋಪ್ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಭಾರತದಲ್ಲಿ ರಾಜಿಕೀಯ ಕ್ಷೇತ್ರದಲ್ಲಿ ಆನೇಕ ತೋದರೆಗಳಿಗೆ ಆಸಕ್ತಿಯನ್ನು ತೋರಿಸುತ್ತಾರೆ. ಭಾರತದ ಗುರುಕುಲದಲ್ಲಿ ಕಲೆ, ಸಾಹಿತ್ಯ ಮತ್ತು ಯೋಗ ಕಲಿಸುತಿದ್ದಾರೆ. ಬಾಬಾ ರಾಮ್ ದೇವ್ ಅವರು ದಿವ್ಯ ಯೋಗ ಮಂದಿರ್ ಟ್ರಸ್ಟ್ ಅನ್ನು ೧೯೯೫ ರಲ್ಲಿ ಸ್ಥಾಪನೆ ಮಾಡಿದ್ದರು. ಬಾಬಾ ರಾಮ್ ದೇವ್ ಅವರು ೨೦೦೩ ರಲ್ಲಿ ಆಸ್ತ ಎಂಬ ದೂರದರ್ಶನದಲ್ಲಿ ಬೆಳಗ್ಗಿನ ವೇಳೆಯಲ್ಲಿ ಭಾರತೀಯರಿಗೆ ಯೋಗ ಬಗ್ಗೆ ಪರಿಚಯ ಮಾಡಿಕೊಟ್ಟರು. ಇವರ ಯೋಗ ಕೇಂದ್ರಕ್ಕೆ ಆನೇಕ ಭಾರತೀಯರು ಹಾಗೂ ಆನೇಕ ವಿದೇಶಿಯರು ಭೇಟಿ ನೀಡುತ್ತಿದ್ದರು. ಇವರು ಗಣ್ಯರಿಗೆ ಆದ್ದರೆ ಅಮಿತ ಬಚ್ಚನ್ ಹಾಗೂ ಶಿಲ್ಪಶಟ್ಟಿ ಯಂತ ನೂರಾರು ಗಣ್ಯರಿಗೆ ಯೋಗದ ಬಗ್ಗೆ ಪರಿಚಯ ಮಾಡಿಕೊಟ್ಟರು. ಇವರು ಬ್ರಿಟನ್, ಅಮೆರಿಕಾ ಮತ್ತು ಜಪಾನ್ ನಲ್ಲಿ ಯೋಗದ ಬಗ್ಗೆ ಪರಿಚಯ ಮಾಡಿಕೊಟ್ಟರು. == ಪತಂಜಲಿ ಯೋಗಪತ್ == ಬಾಬಾ ರಾಮ್ ದೇವ್ ಅವರು ಹರಿದ್ವಾರದಲ್ಲಿ ಪತಂಜಲಿ ಯೋಗಪತ್ ಕೇಂದ್ರ ಸ್ಥಾಪಿಸಿ ಯೋಗ ಮತ್ತು ಆರ್ಯೋವೆದದ ಬಗ್ಗೆ ಹೇಳಿಕೊಡುತ್ತಿದ್ದರು. ಇವರು ಭಾರತದಲ್ಲಿ ಪತಂಜಲಿ ಯೋಗಪತ್ ಎಂಬ ಎರಡು ವಿಭಾಗವನ್ನು ಮಾಡಿದ್ದಾರೆ. ಆದ್ದರೆ ಪತಂಜಲಿ ಯೋಗಪತ್ - ೧ ಮತ್ತು ಪತಂಜಲಿ ಯೋಗಪತ್ - ೨ ಎಂಬ ಎರಡು ವಿಭಾಗವನ್ನು ಸ್ಥಾಪನೆ ಮಾಡಿದ್ದರು. ಪತಂಜಲಿ ಆರ್ಯೋವೆದವನ್ನು == ಪತಂಜಲಿ ಆಯುರ್ವೇದ == ಬಾಬಾ ರಾಮ್ ದೇವ್ ಮತ್ತು ಆರ್ಚಯ ಬಾಲಕೃಷ್ಣ ಅವರು ಹತ್ತು ವರ್ಷದ ಮುಂಚೆ ಹರಿದ್ವಾರದಲ್ಲಿ ಸ್ಥಾಪನೆ ಮಾಡಿದ್ದರು. ಇತ್ತೀಚ್ಚಿನ ವಾರ್ತೆಗಳ ಪ್ರಕಾರ ಶೇಕಡ ೧೩ ಕಂಪನಿಗಳು ಸೋಲುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ಬಾಬಾ ರಾಮ್ ದೇವ್ ಅವರಿಗೆ ಪತಂಜಲಿ ಆರ್ಯೋವೆದಕ್ಕೆ ಅರ್ಧ ಕಾಡನ್ನು ಬಿಟ್ಟುಕೊಟ್ಟಿದ್ದಾರೆ. == ರಾಜಕೀಯ ಪ್ರಚಾರ == ಬಾಬಾ ರಾಮ್ ದೇವ್ ಅವರ 'ಭಾರತ ಸ್ವಾಭಿಮಾನ' ಎಂಬ ರಾಜಿಕೀಯ ಪಕ್ಷವನ್ನು ೨೦೧೦ ರಲ್ಲಿ ಸ್ಥಾಪನೆ ಮಾಡಿದ್ದರು. ಪ್ರತಿಯೊಬ್ಬ ವ್ಯಕ್ತಿಯು ಮುಂದಿನ ರಾಷ್ಟ್ರೀಯ ಚುನಾವಣೆಯಲ್ಲಿ ಸ್ಥಾನವನ್ನು ಸಿಗುವ ಬರವಸೆ ನೀಡುತ್ತಿದ್ದಿರು. ಇವರಿಗೆ ಯವುದೇ ಆಸಕ್ತಿ ಇರಲ್ಲಿಲ ರಾಜಿಕೀಯ ಪಕ್ಷಕ್ಕೆ ಅಥವಾ ರಾಜಿಕೀಯಕ್ಕೆ ಬರಲು ಆಸಕ್ತಿ ಇರಲ್ಲಿಲ. ಆದ್ದರೆ ಬಡವರಿಗೋಸ್ಕೂರ ರಾಜಿಕೀಯಕ್ಕೆ ಬರಲು ಯೋಜಿಸಿದ್ದರು. ನರೆಂದ್ರ ಮೋದಿಯವರಿಗೆ ಮುಂದಿನ ಪ್ರಧಾನ ಮಂತ್ರಿ ಯಾಗಲು ಪ್ರೋತ್ಸಾಹಿಸಿದ್ದರು. ಬಾಬಾ ರಾಮ್ ದೇವ್ ಅವರು ಭಾರತ ಸ್ವಾಭಿಮಾನ ಟ್ರಸ್ಟ್ ಸ್ಥಾಪಿಸಿ ಇದನ್ನು ರಾಜಿಕೀಯ ಪ್ರಚಾರಕ್ಕೆ ವರ್ಗವಣೆ ಮಾಡಿದ್ದರು ಮತ್ತು ಆರ್ಥಿಕ ವ್ಯವಸ್ಥೆಗಳಿಗಾಗಿ ಎರಡು ಟ್ರಸ್ಟ್ ಸ್ಥಾಪನೆ ಮಾಡಿದ್ದರು. ಅವುಗಳೆಂದರೆ ದಿವ್ಯ ಯೋಗ ಮತ್ತು ಪತಂಜಲಿ ಯೋಗ ಪೀಟಾವನ್ನು ಸ್ಥಾಪನೆ ಮಾಡಿದ್ದರು. == ಭ್ರಷ್ಟಾಚಾರ ವಿರೋಧಿ == ಬಾಬಾ ರಾಮ್ ದೇವ್ ಅವರು ಸಂಬಂಧಿಸಿದಂತೆ ಭ್ರಷ್ಟಚಾರ ವಿರೋಧಿ ಮತ್ತು ಜನಲೋಕ ಪಾಲ ತಳಮಳ ತೊಡಗಿಸಿ ಕೊಂಡರು. ಬಾಬಾ ರಾಮ್ ದೇವ್ ಅವರು ಹೆಣ್ಣಿನ ವೇಷ ಧರಿಸಿದ್ದರಿಂದ ಪೋಲೀಸರ್ ಬಂಧಿಸಿದ್ದರು. ದೆಹಲಿಯಲ್ಲಿ ಬಾಬಾ ರಾಮ್ ದೇವ್ ಅವರ ೬೫೦೦೦ ಜನರು ರಾಮ್ ಲೀಲಾ ನಗರದಲ್ಲಿ "ವಂದೇ ಮಾತರಮ್" ಎಂದು ಘೋಷಿಸುತ್ತಿದ್ದರು. ಮಧ್ಯರಾತ್ರಿಯಲ್ಲಿ ಹತ್ತು ಸಾವಿರ ದೆಹಲಿ ಪೋಲೀಸರ್ ಬಂದು ದಾಳಿ ಮಾಡಿದ್ದರು. ಇದ್ದರಿಂದ ೫೩ ಜನ ಗಾಯಾಗೊಂಡರು. ಬಾಬಾ ರಾಮ್ ದೇವ್ ಅವರು ೬ ದಿನ ಉಪವಾಸ ಸತ್ಯಾಗ್ರವನ್ನು ದೆಹಲಿ ಅಂಬೇಡ್ಕರ್ ಕ್ರೀಡ್ರಾಂಗಣ್ದಲ್ಲಿ ಆಗಸ್ಟ್ ೧೪, ೨೦೧೨ ರಲ್ಲಿ ಸತ್ಯಾಗ್ರವನ್ನು ನಡೆಸಿದ್ದರು. ನ್ಯೂಸ್ ಪೇಗ್ ಎಂಬ ಪತ್ರಿಕೆಯ ಪ್ರಕಾರ ಸಾಲಿಂಗಕಾಮಿಯನ್ನು ವಿರೋಧಿಸುತ್ತಾರೆ. ಬಾಬಾ ರಾಮ್ ದೇವ್ ಅವರು ತೀರ್ಪ್ರಿನ ಪ್ರಕಾರ ನ್ಯಾಯಾಲಯದಲ್ಲಿ ಅಪರಾಧ ಮತ್ತು ಮಾನಸಿಕ ಅಸ್ವಸ್ಥತೆಯನ್ನು ಪ್ರೊತ್ಸಾಹಿಸುತ್ತಿದ್ದಾರೆ. ಇದ್ದರಿಂದ ಭಾರತದ ಕುಟುಂಬಗಳಿಗೆ ತೊಂದರೆಯಾಗುತ್ತದೆ. ಸಲಿಂಗಕಾಮ ಒಂದು ಪ್ರಕೃತಿಯಲ್ಲಿ ಮತ್ತು ಚಿಕಿತ್ಸೆ ನೀಡಬಹುದು. ಇದನ್ನು ಸರ್ಕಾರದ ಕಾನೂನು ವಿರೋಧಿಸಿದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನೆಡೆಸುತ್ತೇನೆ. == ಸಲಿಂಗಕಾಮ ವೀಕ್ಷಣೆಗಳು == ಬಾಬಾ ರಾಮ್ ದೇವ್ ಅವರು ಸಲಿಂಗಕಾಮ ಅವರನ್ನು ಚಿಕಿತ್ಸೆಗೊಳಿಸುತ್ತಾರೆ. ಅವರಿಗೆ ಆರು ತಿಂಗಳಲ್ಲಿ ಯೋಗ, ಪ್ರಾಣಯಾಮ ಮತ್ತು ಧ್ಯಾನ ವಿಧಾನಹಳಿಂದ ಚಿಕಿತ್ಸೆಗೆ ಒಳಪಡಿಸುತ್ತಾರೆ. == ಕಾರ್ಮಿಕ ಕಾನೂನಿನ ಉಲ್ಲಂಘನೆ ಮತ್ತು ಔಷಧಗಳಲ್ಲಿ ಪ್ರಾಣಿಗಳ ಭಾಗಗಳು == ಮಾರ್ಚ್ ೨೦೦೫ ರಂದು ದಿವ್ಯ ಯೋಗ ಮಂದಿರ್ ಟ್ರಸ್ಟನ್ನು ಪ್ರಾರಂಭಿಸಿದ್ದರು. ೧೧೩ ಕೆಲಸಗಾರರು ಮತ್ತು ಅವರಿಗೆ ಸಂಭಂಳವನ್ನು ನೀಡುತ್ತಿದ್ದರು. ಔಷಧಿಗಳ ಮಾದರಿಯನ್ನು ಸರ್ಕಾರದ ಪ್ರಯೋಗಲಯಾದಲ್ಲಿ ತನಿಖೆ ಮಾಡುತ್ತಿದ್ದರು. ಜನವರಿ ೨೦೦೬ ರಂದು ದಿವ್ಯ ಯೋಗ ಮಂದಿರ್ ಟ್ರಸ್ಟನಲ್ಲಿ ಮನುಷ್ಯರ ಮತ್ತು ಪ್ರಾಣಿಗಳ ಮೂಳೆಯಿಂದ ಔಷಧಿಗಳನ್ನು ತಯಾರಿಸುತ್ತಿದ್ದರು. ಕಾರಟ್ ರವರು ಬಿ.ಜೆ.ಪಿ ಪಕ್ಷಕ್ಕೆ ನಾಯಕಿಯಾದ್ದರು. ಕೇಲವು ತಿಂಗಳನಂತರ ೨೦೦೬ ತಲ್ಲಿ ನಾಲ್ಕು ಮಾದರಿಗಳನ್ನು ದೆಹಲಿ ಸರ್ಕಾರಕ್ಕೆ ಪರೀಕ್ಷೆಸಲ್ಲು ಕಳುಹಿಸಿದ್ದರು. == ಏಡ್ಸ್ ಮತ್ತು ಲೈಂಗಿಕ ಶಿಕ್ಷಣ ವೀಕ್ಷಣೆಗಳು == ಡಿಸೆಂಬರ್ ೨೦೦೬ ರಲ್ಲಿ ಬಾಬಾ ರಾಮ್ ದೇವ್ ಅವರು ಏಡ್ಸ್ ರೋಗಿಗಳಿಗೆ ಯೋಗ ಮತ್ತು ಆರ್ಯೋವೆದ ಔಷಧಿಗಳನ್ನು ದಿವ್ಯ ಯೋಗ ಮಂದಿರ್ ಟ್ರಸ್ಟನಲ್ಲಿ ಮಾರಾಟ ಮಾಡುತ್ತಿದ್ದರು. ಇವರು ಲೈಂಗಿಕ ಶಿಕ್ಷಣಗಳ ಬದಲಾಗಿ ಯೋಗ ಶಿಕ್ಷಣಗಳನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದರು. ಇದ್ದರಿಂದ ಏಡ್ಸ್ ಅರಿವು ಮತ್ತು ಅದರ ತಡೆಯುವ ಪ್ರಯತ್ನವನ್ನು ಮಾಡಬಹುದು. ಬಾಬಾ ರಾಮ್ ದೇವ್ ಅವರ == ಪ್ರಶಸ್ತಿಗಳು ಮತ್ತು ಸಾಧನೆಗಳು == (೧) ಜನವರಿ ೨೦೦೭ ರಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ 'ಕಾಲಿಂಗ ಇನ್ಸ್ವಿಟ್ಯೂಟ್ ಆಫ್ ಕೈಗಾರಿಕಾ ತಂತ್ರಜ್ಞಾನ', ಭುವನೇಶ್ವರ. (೨) ಜನವರಿ ೨೦೧೧ ರಂದು ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ರಾಷ್ಟ್ರೀಯ ಶ್ರೇಷ್ಟತಾ ಪ್ರಶಸ್ತಿಯನ್ನು, ಮಹಾರಾಷ್ಟ್ರದ ಗವರ್ನರ, ಕೆ. ಶಂಕರ್ ನಾರಯಣ ಅವರು ನೀಡಿ ಗೌರವಿಸಿದ್ದರು. (೩) ಜುಲೈ ೨೦೧೨ ರಲ್ಲಿ ತರುಣ್ ಕ್ರಾಂತಿ ಪ್ರಶಸ್ತಿಯನ್ನು, ಆಹಮದಾಬಾದ್ ನಲ್ಲಿ ನರೆಂದ್ರ ಮೋದಿಯವರು ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು. (೪) ಏಪ್ರಿಲ್ ೨೦೧೫ ರಲ್ಲಿ ಹರಿಯಾಣದ ಸರ್ಕಾರವು ಬಾಬಾ ರಾಮ್ ದೇವ್ ಅವರಿಗೆ ಯೋಗ ಮತ್ತು ಆರ್ಯೋವೆದಗಳಿಗೆ ರಾಯಾಭಾರಿ ನೀಡಿದ್ದರು. (೫) ಮೇ ೨೦೧೬ ರಲ್ಲಿ ಅಮೆರಿಕಾನ್ ಉದ್ಯಮ ನಿಯತಕಾಲಿಕೆಯ 'ಪಾಸ್ಟ್ ಕಂಪನಿ' ಯವರು ಬಾಬಾ ರಾಮ್ ದೇವ್ ಅವರಿಗೆ ೨೭ನೇ 'ಅತ್ಯಂತ ಸೃಜನಶೀಲ ಉದ್ಯಮ ಜನರು' ಆಫ್ ೨೦೧೬ರ ಪಟ್ಟಿಯಲ್ಲಿ ವಿಗಂಡಿಸಿದ್ದರು. == ಗ್ರಂಥಗಳು == ಬಾಬಾ ರಾಮ್ ದೇವ್ ಅವರ ಗ್ರಂಥಗಳು:- ಯೋಗ ಮತ್ತು ಯೋಗಗಳ ರಹಸ್ಯ, ಪ್ರಾಣಯಾಮ ರಹಸ್ಯ, ಡ್ರಗ್ ತತ್ವಶಾಸ್ತ್ರ ಮತ್ತು ಜೀವನಿಯ ಮತ್ತು ಸಸ್ಯಗಳ ಆಡಳಿತ ಎಂಬ ಗ್ರಂಥಗಳನ್ನು ಬಾಬಾ ರಾಮ್ ದೇವ್ ಅವರು ಬರೆದಿರುವ ಗ್ರಂಥಗಳು. == ಉಲ್ಲೇಖಗಳು == ://../--/--/--. ://..//desh1509/Swami_Ramdev_Baba. 2013-07-03 ವೇಬ್ಯಾಕ್ ಮೆಷಿನ್ ನಲ್ಲಿ. ://..//-6345.